ಬನಶಂಕರಿ ಮೂವೀ ಕ್ರಿಯೇಷನ್ಸ್ ಲಾಂಛನದಲ್ಲಿ ಎಸ್.ರಮೇಶ್ ಆವರು ನಿರ್ಮಿಸುತ್ತಿರುವ ‘ವಿಕ್ಕಿ’ ಚಿತ್ರಕ್ಕೆ ತಾವರೆಕೆರೆ ಬಳಿ ಮೂರು ದಿನಗಳ ಕಾಲ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆದಿದೆ. ನಾಯಕ ಆರ್ಯನ್, ಸ್ವಾತಿ, ಸುಂದರರಾಜ್, ಕೀರ್ತಿರಾಜ್, ಮೋಹನ್ ರೈ, ಗುಬ್ಬಿ ನಟರಾಜ್, ರತ್ನಕುಮಾರಿ, ಸುಜಾತ ಗೌಡ, ರವಿ ಕಲ್ಯಾಣ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸುಪ್ರೀಮ್ ಸುಬ್ಬು ಅವರ ಸಾಹಸ ನಿರ್ದೇಶನದಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮೂಡಿಬಂದಿದೆ.
ಜೈ- ಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೀಟರ್ ಅವರ ಸಂಗೀತ ನಿರ್ದೇಶನ ಹಾಗೂ ಅರುಣ್ ಅವರ ಛಾಯಾಗ್ರಹಣವಿದೆ.
ಆರ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಸ್ವಾತಿ. ಸುಂದರರಾಜ್, ಕೀರ್ತಿ ರಾಜ್, ರಘು ನಾಯಕ್, ಬ್ಯಾಂಕ್ ಜನಾರ್ದನ್, ಮನಮೋಹನ್ ರೈ, ಗುಬ್ಬಿ ನಟರಾಜ್, ಕೆಂಪೇಗೌಡ, ರತ್ನಕುಮಾರಿ, ಸುಜಾತ ಗೌಡ, ರವಿಕಲ್ಯಾಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.